Sunday, January 2, 2011

ನಿತ್ಯಾನಂದ ಯುಗಪುರುಷ : ಶಾಂತವೀರ ಶ್ರೀ

Swami Nityananda
ರಾಮನಗರ, ಜ. 2 : ಸ್ವಾಮಿ ನಿತ್ಯಾನಂದರಂತಹ ಯುಗಪುರುಷರು ಇರುವುದರಿಂದಲೇ ವಿಶ್ವದಲ್ಲಿ ಇಂದು ಶಾಂತಿ ನೆಲೆಸಿದೆ ಎಂದು ಬೆಂಗಳೂರು ಕೊಳದಮಠದ ಶ್ರೀ ಶಾಂತವೀರ ಸ್ವಾಮಿ ಹೇಳಿದರು.

ಬಿಡದಿ ಬಳಿ ಇರುವ ಧ್ಯಾನಪೀಠಂ ಆಶ್ರಮದಲ್ಲಿ ನಿತ್ಯಾನಂದ ಸ್ವಾಮಿಯ 34ನೇ ಹುಟ್ಟುಹಬ್ಬ ಆಚರಣೆಯ ಅಂಗವಾಗಿ ಏರ್ಪಡಿಸಿದ್ದ ಆನಂದೋತ್ಸವ-2011 ರಲ್ಲಿ ಪಾಲ್ಗೊಂಡು ನಿತ್ಯಾನಂದ ಅಖಾಡ, ನಿತ್ಯಾನಂದ ನಟನಾಸಭಾ ಮತ್ತು ನಿತ್ಯಾನಂದ ಭವನ ಉದ್ಘಾಟಿಸಿ ಆರ್ಶೀವಚನ ನೀಡಿದರು.

ನಿತ್ಯಾನಂದ ವಿರುದ್ಧದ ಇರುವ ಕಳಂಕದ ಬಗ್ಗೆ ಪ್ರಸ್ತಾಪಿಸಿದ ಅವರು, ಬಹುತೇಕ ಧಾರ್ಮಿಕ ಗುರುಗಳ ವಿರುದ್ಧ ವಿವಿಧ ರೀತಿಯ ಆರೋಪಗಳು ಕೇಳಿಬಂದಿವೆ. ಆದರೆ, ಅವರೆಲ್ಲ ಅದರಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ನಿತ್ಯಾನಂದರ ಮೇಲಿನ ಕಳಂಕ ಸಹ ಬೇಗ ಕರಗಿ ಹೋಗುತ್ತದೆ ಎಂದು ಶಾಂತವೀರ ಸ್ವಾಮೀಜಿ ನುಡಿದರು.

ನಿತ್ಯಾನಂದರ ಜೊತೆಗೆ ರಾಸಲೀಲೆಯಲ್ಲಿ ತೊಡಗಿದ್ದಾರೆ ಎನ್ನಲಾದ ತಮಿಳು ನಟಿ ರಂಜಿತಾ ಮತ್ತು ಹಿಂದಿ ಚಿತ್ರನಟಿ ಜೂಹಿಚಾವ್ಲಾ ಧ್ಯಾನಪೀಠಂಗೆ ಭೇಟಿ ನೀಡಿ ನಿತ್ಯಾನಂದರ ಆರ್ಶೀವಾದ ಪಡೆದುಕೊಂಡಿದ್ದು ವಿಶೇಷವಾಗಿತ್ತು ಎಂದು ಧ್ಯಾನಪೀಠಂನ ಮೂಲಗಳು ತಿಳಿಸಿವೆ.(ಸ್ವಾಮಿ ನಿತ್ಯಾನಂದ)English summary
Shantaveer Swamiji of Koladamath, Bangalore has said, Swami Nityananda is great religious leader of India, He's participated in the Swami Nityananda's 34 th birth day celebration in Dhyanapeetam, near Bidadi in Bangalore on Saturaday.

No comments: